ಭಾನುವಾರ, ಸೆಪ್ಟೆಂಬರ್ 17, 2017

ಕಲ್ಪನೆಗೆ ಜೀವ ತುಂಬುವುದು ಎಂದರೆ....

ಬಿ. ಮಂಜುನಾಥ್ ಕಾಮತ್.
ಭಾರತೀಯ ಸಮಕಾಲೀನ ಚಿತ್ರ ಕಲಾವಿದರು. 
ಹುಟ್ಟಿ ಬೆಳೆದದ್ದು : ಮಂಗಳೂರಿನಲ್ಲಿ 
ಸದ್ಯ ವಾಸ್ತವ್ಯ: ದೆಹಲಿಯಲ್ಲಿ


(ಇವರು ಕಥೆಯನ್ನು ಅವರ ಚಿತ್ರಗಳ, ಮೂರ್ತಿಗಳ, ಪೈಂಟಿಂಗ್, ವೀಡಿಯೋ ಮತ್ತು ಡಿಜಿಟಲ್ ಮಾಧ್ಯಮದ ಮೂಲಕ ನಿರೂಪಣೆ ಮಾಡುತ್ತಾರೆ.)

  
     ಮನೆಯ ಒಂದು ಮೂಲೆಯಲ್ಲಿ ತುಕ್ಕು ಹಿಡಿದಿರುವ ಒಂದು ಕಬ್ಬಿಣದ ಪೆಟ್ಟಿಗೆಯ ಬೀಗ ಒಡೆದು ತೆರೆದಾಗನಾನು 22 ವರ್ಷಗಳ ಹಿಂದೆ ಪಾಸು ಮಾಡಿದ ನನ್ನ ಡ್ರಾಯಿಂಗ್ ಗ್ರೇಡ್ ಹೈಯರ್ ಮತ್ತು ಲೋವರ್ ಪರೀಕ್ಷೆಯ ಪ್ರಮಾಣ ಪತ್ರಗಳು ಸಿಕ್ಕಿತುಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿರುವ ಪರೀಕ್ಷೆಯ ಪ್ರಮಾಣ ಪತ್ರವದುಕ್ರಿಕೆಟ್ ಮ್ಯಾಚ್ ಫೈನಲ್ ನೋಡಲು   ಪರೀಕ್ಷೆಯಲ್ಲಿನ ಫ್ರಿಹ್ಯಾಂಡ್ ಡ್ರಾಯಿಂಗ್ ಎಂಬ ವಿಷಯಕ್ಕೆ 3 ಗಂಟೆ ಉಪಯೋಗಿಸುವ ಬದಲು 1.5 ಗಂಟೆಯಲ್ಲೇ ಮುಗಿಸಿ ಮನೆಗ ಓಡಿದ್ದರಿಂದ, ನಾನು ನನ್ನ ಡ್ರಾಯಿಂಗ್ ಅಧ್ಯಾಪಕರಾದ ಟಿ.ಕೆ. ಆಚಾರ್ಯರಿಂದ ಬೈಯಿಸಿಕೊಂಡ ನೆನಪು.ಇದು ನನ್ನನ್ನು ಬಾಲ್ಯದದಿನಗಳತ್ತ ಕೊಂಡೊಯಿತು...                                                                       ಬಿ. ಮಂಜುನಾಥ್ ಕಾಮತರು 
      ಓಹ್ ಹೌದಲ್ವ..!? ನಾನೂ ನನ್ನ ಶಾಲಾ   ದಿನಗಳಲ್ಲಿ ಬಣ್ಣ ಪೆನ್ಸಿಲುಗಳಿಂದ ಚಿತ್ರ ಬರೆದು   ಸಂಭ್ರಸಿದ್ದೆಎಲ್ಲರಿಂದ ಪ್ರಶಂಸೆ ಪಡೆದಿದ್ದೆಒಂದು ಕ್ಷಣ ಮನೆಯ ಗೋಡೆಯ ಮೇಲೆ ರಾರಾಜಿಸುತ್ತಿದ್ದ ಜಿಂಕೆಯ ಜೊತೆಗಿರುವ ಕೃಷ್ಣನ ಚಿತ್ರವನ್ನೇ ದಿಟ್ಟಿಸುತ್ತಾ ಕುಳಿತುಕೊಂಡೆ.

    
 ನನ್ನ ಮಗಳು ಸಾಹಿತ್ಯಳು ಇವತ್ತೇಕೋ ತುಂಬ ಹಟ ಮಾಡುತ್ತಿದ್ದಳುಅವಳ ಕಾಲಿಗೆ ಬಣ್ಣದ ಚಪ್ಪಲಿಯನ್ನು ತೊಡಿಸಿಕೈ ಹಿಡಿದುಕೊಂಡು ನಮ್ಮ ಮನೆಯ ಹತ್ತಿರವಿರುವ ಕಾಂದಟ್ಟದ ಕಡೆಗೆ ಹೆಜ್ಜೆ ಹಾಕಿದೆನನ್ನ ತಂಗಿಯ ಮಗನೂ ನಮ್ಮ ಹಿಂದೆ ಓಡಿ ಬಂದಿರುವುದನ್ನು ನಾನು ಗಮನಿಸಿರಲಿಲ್ಲ

                                                  ಚಿತ್ರಕ್ರಪೆ:ಬಿ. ಮಂಜುನಾಥ್ ಕಾಮತ್
                        
                                                              
     ಕಾಂದಟ್ಟ ಒಂದು ಸುಂದರ ರಮಣೀಯ ತಾಣನಾನು ಒಂದು ಸಣ್ಣ ಬಂಡೆಯ ಪಕ್ಕ ಒಂದು ಮರದ ಕೆಳಗೆ ಕುಳಿತೆನನಗಂತು ಮರಗಳ ರೆಂಬೆ ಕೊಂಬೆಗಳಿಂದ ನಿರ್ಮಿಸಿದ ತಂಪಾದ ಹಸಿರು ಚಪ್ಪರದ ಕೆಳಗೆ ಕುಳಿತ ಅನುಭವವಾಯಿತುಪಕ್ಕದಲ್ಲಿ ನೀರು ಹರಿಯುವ ಜುಳುಜುಳು ಇಂಪಾದ ನಾದಚಪ್ಪರದಂತಿರುವ ಮರಗಿಡಗಳ ಮೇಲಿಂದ ಎತ್ತರದಲ್ಲಿ ಬೃಹದಾಕಾರದ ವಿದ್ಯುತ್ ಗೋಪುರಗಳಿಗೆ ಹಾದು ಹೋಗಿರುವ ಹೈ ಟೆನ್ಷನ್ ತಂತಿಗಳಿಂದ ಬರುತ್ತಿರುವ ಹಾರ್ಮೋನಿಯಮ್ ಸ್ವರಮರದ ಮೇಲೆ ಗೂಡು ಕಟ್ಟಿರುವ ಜೇನ್ ನೊಣಗಳ ಸುಂದರ ಸಂಗೀತಒಡೆದ ನೆಲದ ಒಳಗಿನಿಂದ ಹೊರಬಂದು ಸಾಲಗಿ ಏನನ್ನೋ ಸಾಗಿಸುತ್ತಿರುವ ದೊಡ್ಡ ಇರುವೆಗಳ ಸಾಲು.ನಾನಂತೂ ಖುಷಿಯಿಂದ ಕಳೆದು ಹೋದೆನನ್ನ ಮಗಳು ಸಾಹಿತ್ಯ ಮತ್ತು ತಂಗಿಯ ಮಗ ಹರಿಯುವ ನೀರಿನಲ್ಲಿ ಕಣಪಡೆ ಗಿಡಗಳ ಹಾಲಿನಿಂದ ಮೀನುಗಳಿಗೆ ಮತ್ತುಬರಿಸಿ ಮೀನು ಹಿಡಿಯಲು ಕಣಪಡೆ ಗಿಡಗಳನ್ನು ಕಡಿದು ತರಲು ಹೊರಟು ಹೋದರು .                        
                                     
   "ಕಲೆ ಎಲ್ಲರನ್ನೂ ಕೈಬೀಸಿ ಕರೆಯುತ್ತದೆಆದರೆ ಕೆಲವರನ್ನು ಮಾತ್ರ ಆರಿಸಿಕೊಳ್ಳುತ್ತದೆ". ಇದನ್ನು ಅಂಡರ್ ಲೈನ್  ಮಾಡಿ ಎಂದು ನನ್ನ ಕಾಲೇಜು ಕನ್ನಡ ಉಪನ್ಯಾಸಕರಾದ ಗುಣಪಾಲ ಕಡಂಬರು ಚಿತ್ರ ಕಲಾವಿದ ಕೆವೆಂಕಟಪ್ಪ ಅವರ ಕುರಿತು 'ಕಲಾತಪಸ್ವಿ'ಎಂಬ ಪಾಠ ಮಾಡುವ ಸಂದರ್ಭ ಹೇಳಿದ ವಾಕ್ಯವಿದು.                    
      ನನ್ನ ಸಂಚಾರಿ ದೂರವಾಣಿಯಲ್ಲಿ ಡೌನ್ ಲೋಡ್ ಮಾಡಿರುವ ವಂದನಾ ಶುಕ್ಲಾ ಮತ್ತು ಕಲಾವಿದ ಮಂಜುನಾಥ್ ಕಾಮತ್ ಇವರ ಸಂದರ್ಶನ ಕೇಳಲು ಶುರುವಿಟ್ಟುಕೊಂಡೆ.
                             ಚಿತ್ರ: ನವನೀತ್ ಪಾರೀಖ್

                                        
              ಮಂಜುನಾಥ್ ಕಾಮತ್ ಇವರು ಒಬ್ಬ ವಿಭಿನ್ನ ಚಿತ್ರ ಕಲಾವಿದರುಇವರು ಬಿಡಿಸುವ ಚಿತ್ರಕ್ಕೆ ವಿಭಿನ್ನ ತಲೆಬರಹದೊಂದಿಗೆನೇ ಶುರು ಮಾಡುತ್ತಾರೆ.  ಇಲ್ಲಿರುವ ಚಿತ್ರಗಳನ್ನೊಮ್ಮೆ ನೋಡಿಕಲ್ಪನೆಗೆ ಜೀವ ತುಂಬುವುದು ಎಂದರೆ....ಇದೇನೆ. ಮಧ್ಯಮ ವರ್ಗದ ಸಾಂಪ್ರದಾಯಿಕ  ಕುಟುಂಬದಲ್ಲಿರವಿವರ್ಮರ ಗೋಡೆಗಳಲ್ಲಿನ ಪೈಂಟಿಂಗ್ ಗಳನ್ನು 
                                               ಚಿತ್ರ ಕೃಪೆ:ಬಿ. ಮಂಜುನಾಥ್ ಕಾಮತ್  

ನೋಡುತ್ತಾತನ್ನ ಬಾಲ್ಯದ ದಿನಗಳಲ್ಲಿ ಅಜ್ಜಿ ಹೇಳುತ್ತಿರುವ ಕಥೆಗಳನ್ನು  ಕೇಳಿ ಮನಸ್ಸಿಲ್ಲಿ ತನ್ನದೇ ಕಥೆಗಳನ್ನು ಹೆಣೆಯುತ್ತಾ, ಕಲ್ಪಿಸುತ್ತಾಬೆಳೆಯುತ್ತಾರೆಮಂಗಳೂರಿನಲ್ಲಿರುವ ತಮ್ಮ ಹಳ್ಳಿಯಲ್ಲಿನ ದೇವಾಲಯಗಳಿಗೆ ಹೋದರೆ ಅಲ್ಲಿರುವ ಸುಂದರ ಕಲ್ಲುಗಳಿಂದ ನಿರ್ಮಿತವಾಗಿರುವ ಪೌರಾಣಿಕ ಕಥೆಗಳಿಂದ  ಕೂಡಿರುವ  ಮೂರ್ತಿಗಳನ್ನೇ ಸ್ವಲ್ಪ ಸಮಯ ದಿಟ್ಟಿಸುತ್ತಾ ನಿಂತುಕೊಳ್ಳುತ್ತಿದ್ದರಂತೆ.  ವರಹಾಸಾವಿರ ಕೈಗಳ ದೇವರು ಇವುಗಳು ಮಂಜುನಾಥ್ ಕಾಮತರಿಗೆ  ಚಿಕ್ಕಂದಿನಲ್ಲಿ ಕುತೂಹಲ ಮೂಡಿಸುತ್ತಿತ್ತು.ದೇವಾಲಯಗಳೇ ಅವರಿಗೆ ತಮ್ಮ ಬಾಲ್ಯದ ದಿನಗಳಲ್ಲಿ ಆರ್ಟ್  ಮ್ಯೂಸಿಯಮ್ಅರ್ಟ್ ಗ್ಯಾಲರಿಯಾಗಿತ್ತುಕಾಮತರು    ವಿಭಿನ್ನ ಮೂರ್ತಿಗಳನ್ನು ಇಷ್ಟಪಡುತ್ತಾರೆಅವರ ಪತ್ನಿ ಮಂಜುನಾಥ ಕಾಮತರಿಗೆ ಹುಟ್ಟುಹಬ್ಬಕ್ಕೆ ಉಡುಗೋರೆ ಕೊಡುವಾಗ ಇಂತಹ ಮಂಜುನಾಥ್ ಕಾಮತರ ಇಷ್ಟದ ವಸ್ತುಗಳನ್ನೇ ಕೊಡುತ್ತಾರೆ.      

ಚಿತ್ರ ಕೃಪೆ:ಬಿ.ಮಂಜುನಾಥ್ ಕಾಮತ್

 ಕಾಮತರು ತಮ್ಮ SSLC ವಿದ್ಯಾಬ್ಯಾಸ ಮುಗಿಸಿದನಂತರ ಬೇರೆಯವರ ಹಾಗೆ ಅವರೂ ಡಿಪ್ಲೊಮಾ ಕಲಿಯಲು ಅರ್ಜಿ ಹಾಕುತ್ತಾರೆ.  ಸಮಯದಲ್ಲಿ ಆರ್ಟ್ ಕಾಲೇಜು ಮತ್ತು ಅದರಲ್ಲಿನ ವಿಭಾಗಗಳ ಇರುವಿಕೆಯ ತಿಳುವಳಿಕೆ ಅವರಿಗಿರುವುದಿಲ್ಲ. ಕಾಮತರು ಅವರೇ ಹೇಳುವಂತೆ ತಮ್ಮ ಶಾಲಾ ದಿನಗಳಲ್ಲಿ ಓದಿನಲ್ಲಿ ಅಷ್ಟೇನೂ ಜಾಣರಾಗಿರಲಿಲ್ಲವಂತೆ.ಕ್ಲಾಸಿನಲ್ಲಿ ಕುಳಿತು ತಾನು ನೋಡಿ ಬಂದಿರುವ, ಕುಶಲ ಕರ್ಮಿಗಳು ಗಣೇಶ ಹಬ್ಬದ ಸಂದರ್ಭ ಮಾಡುತ್ತಿರುವ ಮೂರ್ತಿ ಎಷ್ಟು ದೊಡ್ಡದಾಗಿರಬಹುದು ಎಂದು ಮನಸ್ಸಿನ್ನಲ್ಲಿ ಕಲ್ಪಿಸುತ್ತಿದ್ದರಂತೆ.  
    ಒಂದು ದಿನ ಗೃಂಥಾಲಯದಲ್ಲಿ ಮೈಸೂರಿನಲ್ಲಿ ಆರ್ಟ್ ಕಾಲೇಜು ಇರುವ ಬಗ್ಗೆ ಮತ್ತು ಅಲ್ಲಿ ಚಿತ್ರಕಲೆ ಕಲಿಸುವ ಬಗ್ಗೆ ತಿಳಿದುಕೊಂಡು ತಂದೆಯನ್ನು ಒಪ್ಪಿಸಿ, ಮೈಸೂರಿನಲ್ಲಿ ಆರ್ಟ್ ಕಾಲೇಜಿಗೆ ಸೇರಿಕೊಳ್ಳುತ್ತಾರೆ.                                              ಚಿತ್ರ: ಗೂಗಲ್
             
                                                                                                             ಮೈಸೂರಿನಲ್ಲಿ ಸುಂದರ ಕಾಡಿನ ಮಧ್ಯದಲ್ಲಿ ನಿರ್ಮಿತವಾಗಿರುವ ಆರ್ಟ್  ಕಾಲೇಜ್ ನಲ್ಲಿ ಮೂರ್ತಿ ಚಿತ್ರವನ್ನು ಮೀಡಿಯಮ್ ಆಗಿ ಅಭ್ಯಸಿಸುತ್ತಿರುವಾಗ ಇವರಿಗೆ ಎಲ್ಲಾ ಮೀಡಿಯಮ್ ಅಂದರೆ ಪೈಂಟಿಂಗ್ಇತ್ಯಾದಿಯಲ್ಲಿ ಕಲಿಯಲು ಇವರ ಉಪನ್ಯಾಸಕರು ಪ್ರೋತ್ಸಾಯಿಸುತ್ತಾರೆಅವರು ಚಿತ್ರಕಲಾ ಪದವಿಯಲ್ಲಿ ಪದಕ ಪಡೆದುಕೊಂಡರೂ, ಅವರ ಪ್ರಮಾಣ ಪತ್ರಗಳನ್ನು ಯಾರಿಗೂ ತೋರಿಸುವ ಪ್ರಮೇಯವೇ ಬರಲಿಲ್ಲವಂತೆ. ಯಾವಾಗಳೂ ವಿಭಿನ್ನವಾಗಿ  ಯೋಚಿಸುವ ಮಂಜುನಾಥ್ ಕಾಮತರುಎಲ್ಲರೂ ತ್ರಕಲೆಯಲ್ಲಿ ಸ್ನಾತಕೋತ್ತರ ಪದವಿಗಾಗಿ ಬರೋಡಕ್ಕೆ ಹೋಗುತ್ತಿದ್ದರೆ, ಇವರು ಮೈಸೂರಿನಿಂದ ದೆಹಲಿಗೆ ಹೊರಟು ನಿಲ್ಲುತ್ತಾರೆತಮ್ಮ ತಂದೆ ತಾಯಿಗೆ ಒಬ್ಬರೇ ಮಗನಾಗಿರುವ ಕಾಮತರು ತಮ್ಮ ತಂದೆಯರಿಗೆ  ವಿಷಯ ತಿಳಿದರೆ ಹೋಗಲು ಇಷ್ಟಪಡಲಾರರು ಎಂದು ಕೊಂಡುತಮ್ಮಲ್ಲಿರುವ ಕೇವಲ 300 ರೂಪಾಯಿ ಹಿಡಿದುಕೊಂಡು ದೆಹಲಿಯ ಬಗ್ಗೆ ಏನೂ ಗೊತ್ತಿರದ ಇವರು ಒಂದು ದಿನ ದೆಹಲಿಗೆ ಹೋಗುವ ರೈಲನ್ನು ಹತ್ತುತ್ತಾರೆ...                                     ಚಿತ್ರ ಕೃಪೆ: ಬಿ. ಮಂಜುನಾಥ್ ಕಾಮತ್ 









    



   ಸಾಹಿತ್ಯ ಓಡೋಡಿ ಬಂದು ಅವರು ಹಿಡಿದ ಎರಡು ಪುಟ್ಟ ಮೀನುಗಳನ್ನು ನನಗೆ ಬಹಳ ಖುಶಿಯಿಂದ ತೋರಿಸಿದಳು. ಸಾಹಿತ್ಯಳು ತನ್ನ ಕಾಲಿಗೆ ಗಾಯ ಮಾಡಿಕೊಂಡಿದ್ದಳು.ರಕ್ತ ಅವಳ ಕಾಲಿನ ಎರಡು ಪುಟ್ಟ ಬೆರಳನ್ನು ದಾಟಿ ಮೂರನೇ ಬೆರಳಿಗೆ ಹರಡಿತ್ತು. ಆದರೂ ಈಗ ಅವಳ ಮನಸ್ಸು ಶಾಂತವಾಗಿತ್ತು..  ಅವಳನ್ನು ಎತ್ತಿಕೊಂಡು ನಾನು ನಮ್ಮ ಮನೆಯ ಕಡೆಗೆ ಹಿಂದಿರುಗಿದೆ....          
                              ಚಿತ್ರ ಕೃಪೆ: ಬಿ. ಮಂಜುನಾಥ್ ಕಾಮತ್ 


ಮಂಜುನಾಥ್ ಕಾಮತರು ಗಣೇಶ ಹಬ್ಬದ ಸಂದರ್ಭ ಗಣೇಶನ  ಮೂರ್ತಿ ತಯಾರಿಸುವ ಕುಶಲಕರ್ಮಿಗಳ ಬಳಿ  ಹೋಗಿ ಕುಳಿತು ಅವರು ನಿರ್ಮಿಸುವ ಬೃಹದಾಕಾರದ ಮೂರ್ತಿಯನ್ನು ಕಂಡು ಖುಶಿಪಡುತ್ತಿದ್ದರುಕಾಮತರು ಹೇಳುವಂತೆ ಅವರ ಚಿತ್ರ ಕಲೆಗೆ ಮೂರ್ತಿ ತಯಾರಿಸುವ ಕುಶಲ ಕರ್ಮಿಗಳೇ ಮೊದಲ ಗುರುಗಳುಮಂಜುನಾಥ್ ಕಾಮತರ ಮಾತಿನ ಶೈಲಿ ನನ್ನ ಕಾಲೇಜಿನ ಅಕೌಂಟೆನ್ಸಿ ಲೆಕ್ಚರರ್ ರಘುವೀರ್ ರನ್ನು        
                                 ಚಿತ್ರ ಕೃಪೆ: ಬಿ. ಮಂಜುನಾಥ್ ಕಾಮತ್ 


     ನೆನಪಿಸುತ್ತದೆ.ಕಬೀರರಅಕ್ಕಮಹಾದೇವಿಯವರ     ವಚನಗಳನ್ನು ಇಷ್ಟಪಡುತ್ತಾರೆಚಿತ್ರಕಲೆಯ ಬಗ್ಗೆ ಇರುವ ಪುಸ್ತಕಗಳನ್ನು ಓದಿದರೆ 90% ಪಾಶ್ಚಿಮಾತ್ಯ ಕಲೆ ಕೇವಲ 10%  ಭಾರತೀಯ   ಕಲೆಯ ಬಗ್ಗೆ ಇರುವುದನ್ನು ಕಂಡು ಬೇಸರ ವ್ಯಕ್ತಪಡಿಸುತ್ತಾರೆ.  ಕಾರ್ಡಿಫ್ಯು.ಕೆ., ಇಂಗ್ಲೆಂಡ್ ಮುಂತಾದ ದೇಶಗಳನ್ನು ಸುತ್ತಿ ಬಂದಿರುವ ಇವರು ಭಾರತ ದೇಶದಲ್ಲಿರುವ ಚಿತ್ರ ಕಲೆಯೇ  ದೇಶಗಳಲ್ಲಿ ಹೊಸ ರೀತಿಯಲ್ಲಿ ನೋಡುವಂತಾಗುತ್ತದೆ ಅಷ್ಟೇ ಎನ್ನುತ್ತಾರೆ.          


     ಚಿತ್ರ ಕೃಪೆ: ಬಿ. ಮಂಜುನಾಥ್ ಕಾಮತ್  

                                                           
ಆಹ್... ರೈಲು ಹೋಗುವ ಶಬ್ದ ಜೋರಾಗಿ ಕೇಳಿಸುತ್ತಿದೆ....
ಹೌದು ರೈಲು ಎಂದಾಗ ನೆನಪಾಯಿತುಮೈಸೂರಿನಿಂದ ದೆಹಲಿಗೆ ರೈಲಿನಲ್ಲಿ ಪ್ರಯಾಣಿಸಿದ  ಮಂಜುನಾಥ್ ಕಾಮತರು 3 ತಿಂಗಳು  ಕಲಾವಿದರಿಗಾಗಿ ಅಲ್ಲಿರುವ  ಅತಿಥಿ ಗೃಹದಲ್ಲಿ ಕಳೆಯುತ್ತಾರೆಅವರಲ್ಲಿರುವ 300 ರೂಪಾಯಿ ಖಾಲಿಯಗುತ್ತಾ ಬರುತ್ತದೆಆಗ 
 

                                                                ಮಂಜುನಾಥ್ ಕಾಮತರಿಗೆ ರಾಜಾ ಸನ್ಮಾನ್      

ಅಲ್ಲಿರುವವರು ಗೆಳೆಯರಾಗಿರುತ್ತಾರೆ.  ಅವರೊಟ್ಟಿಗೆ ಸೇರಿ T ಶರ್ಟಿಗೆ ಪೈಂಟಿಂಗ್ ಮಾಡಿ ದಿನಕ್ಕೆ 70 ರೂಪಾಯಿ ಗಳಿಸುತ್ತಾರೆಮುಂದೆ ಇಕಾನಮಿಕ್ಸ್ ಟೈಮ್ಸ್ ನ್ಯೂಸ್ ಪೇಪರ್  ನಲ್ಲಿ ಇಲಸ್ಟ್ರೇಟರ್ ಆಗಿ  ಕೆಲಸ ಮಾಡುತ್ತಾರೆಒಂದು ದಿನ ಇದ್ದಕ್ಕಿದ್ದಂತೆ  ಕೆಲಸ ಬಿಟ್ಟು ಬಿಡುತ್ತಾರೆಮತ್ತೆ...ಶೂನ್ಯಕ್ಕೆ ಮರಳುತ್ತಾರೆ.                                                                   

    ಹಾಂ..ಒಂದು ಚಿತ್ರದ ಬಗ್ಗೆ ಕಲ್ಪನೆ ಮಾಡಿಕೊಂಡು ನಾನು ಬರೆದ ಕವನ ಸಿಕ್ಕಿತು. ಕೆಳಗೆ ಓದಿ..
                          
    ಕಲೆಯಲ್ಲಿ ವೀಡಿಯೋ ಮಿಡಿಯಮ್ ನಲ್ಲಿ  ಪರಿಣತಿ ಹೊಂದಿರುವ ಕಾಮತರುಅವರ ಸ್ಟುಡಿಯೋದಲ್ಲಿ ಅವರೊಂದಿಗೆ ಕೆಲಸ ಮಾಡಲು  ಬರುವವರು ಮೊದಲ ದಿನಗಳಲ್ಲಿ ಅವರ ಆಲೋಚನೆಗಳಿಗೆ ಹೊಂದಿಕೊಳ್ಳಲು ಕಷ್ಟಪಡುವುದನ್ನು ಆದರೆ ಬರುಬರುತ್ತಾ ಹೊಂದಿಕೊಳ್ಳುವವರನ್ನು ಗಮನಿಸಿರುತ್ತಾರೆ

 ಅವರ ಮಾತಿನಲ್ಲಿ ನಮ್ಮ ದೇಶದ ಬಗ್ಗೆ ಅವರಿಗಿರುವ ಅಭಿಮಾನ ಎದ್ದು ಕಾಣುತ್ತದೆ. ಅವರಿಗೆ ನಮ್ಮ ಮೂಲ ಶಿಕ್ಷಣದ ಬಗ್ಗೆ ಬೇಸರವಿದೆ. ನಾನು  ಜೀವನದಲ್ಲಿ  ಕ್ಷಣದ ಬಗ್ಗೆ ಯೋಚಿಸುತ್ತೇನೆಖುಶಿಯಿಂದ ಕಳೆಯುತ್ತೇನೆ ಎನ್ನುತಾರೆಚಿತ್ರಕಲೆ ಅವರ ದಿನಚರಿಯ ಒಂದು ಭಾಗಹೆಸರು ಗಳಿಸುವ ಬಗ್ಗೆ ಯೋಚನೆ ಮಾಡುವುದಿಲ್ಲ ಎನ್ನುತ್ತಾರೆ.

  ಹೌದು ನಾವು ಮಾಡುವ ಯಾವುದೇ ಕೆಲಸದಲ್ಲಿ  ನಮಗೆ ಖುಶಿ ಇರಬೇಕು. ನಾವು ಮಾಡುವ ಕೆಲಸ ನಮ್ಮ ದಿನಚರಿಯ ಒಂದು ಭಾಗದಂತೆ ಇರಬೇಕು..


     ಇದೇ ಬ್ಲಾಗಿನಲ್ಲಿರುವ 'ತಲ್ಲಣ' ಎಂಬ ತಲೆಬರಹದ ನನ್ನ ಕವನ
  ದಿನ ನಾನು ಮಂಜುನಾಥ್ ಕಾಮತರೊಂದಿಗೆ ನಿಂತು ಛಾಯಚಿತ್ರ ತೆಗೆದುಕೊಳ್ಳುತ್ತಿದ್ದೆನಾನಂತೂ ತುಂಬಾ ಖುಶಿಯಲ್ಲಿದ್ದೆನಾನು ಕಾಮತರ ಅಭಿಮಾನಿಯಾಗಿದ್ದೆಅವರ ಮಾತುಗಳನ್ನು ಕೇಳುವುದೆಂದರೆ ನನಗೆ ತುಂಬಾ ಖುಶಿ..  ಅವರೂ ನನ್ನೊಂದಿಗೆ ಉತ್ಸಾಹದಿಂದಲೇ ಮಾತಾಡುತ್ತಿದ್ದರು...

        ಬೆಕ್ಕುಗಳು ಜಗಳವಾಡುವ ಕರ್ಕಶ ಕಿರುಚಾಟ... ಒಮ್ಮೇಲೆ ಎಚ್ಚರಗೊಂಡೆ.. !! ಬೆಳಿಗ್ಗೆ 5 ಗಂಟೆಯಾಗಿತ್ತು.....     ನಾನು ನಿದ್ದೆಯಲ್ಲಿ ಕನಸು ಕಂಡಿದ್ದೆ.

ನಾನೂ ಮಂಜುನಾಥ್ ಕಾಮತರಿಗಾಗಿ ಒಂದು ವಿಶಿಷ್ಟ ಉಡುಗೋರೆಯನ್ನು ಖರೀದಿಸಿದ್ದೇನೆ...